Wednesday, March 8, 2023

ಕವಿಗೆ ಕವಿ ಮಣಿವನ್-೧: ಶ್ರೀ ಕುವೆಂಪುವಿಗೆ


ಶ್ರೀ ಕುವೆಂಪುವಿಗೆ

ಶ್ರೀ ಗುರುವಿನೊಲುಮೆ ತೊಟ್ಟಿಲ ಶಿಶುವೆ, ನೀ ಕುಡಿದು 
ಧರ್ಮಾಮೃತನ ಧನ್ಯನೆನಿಸಿದಯ್‌; ಆ ಮುನ್ನ 
ಮಲೆನಾಡ ತಾಯ ಚೆಲುವೇ ಪೆತ್ತ ಸಿಸುರನ್ನ: 
ಆಗದೇ ವರಕವಿಯ ಜನನ? ಕೊಳಲಂ ಪಿಡಿದು 
ರಾಗರಾಗಗಳಿ೦ದ ಜನತೆಯ ಎದೆಯ ಮಿಡಿದು, 
ಬಣ್ಣ ಬಣ್ಣದ ಗರಿಯ ಸಾವಿರ ಕಣ್ಣ ನವಿಲ- 
ಹೃದಯಪೀಠದ ಸರಸ್ವತಿಯ ಗಾನದ ಗತಿಯ 
ತೂಗಿ ತೋರುವ ನವಿಲ-ಕುಣಿಕುಣಿಸಿದಯ್‌ ತಣಿದು. 
ನೆಲದ ನಲವ ಚೆಲುವ ಮಯೂರನರ್ತನ ಸಾಕೆ 
ವ್ಯೋಮವಿಹಾರಾಕಾಂಕ್ಷಿ ಪಕ್ಷಿರಾಜನಿಗೆ? 
ಅಮೆಬಾವಿಯೆ ಮಾನಸಸರೋವರದ ಸಂಸರಾಜನಿಗೆ? 
ಹಲಮೆಹಾಡಿದರು ಹೊಸತೆನಿಸೆ ರಾಮಾಯಣಕೆ 
ನವದರ್ಶನ ಸ್ಪರ್ಣಸ್ಪರ್ಶನವನಿತ್ತು ಕೃತಿಸಿ 
ನವಭಾರತದ ಕವಿ ಪ್ರವರನಯ್‌-ನಲಿವೆ ನುತಿಸಿ. 

ರಾಷ್ಟ್ರ,ಕವಿ ಕುವೆಂಪು ಅವರನ್ನು ಕುರಿತು ಎಂ.ವಿ. ಸೀತಾರಾಮಯ್ಯ ಅವರು ರಚಿಸಿದ ಕವಿತೆ. ೧೯೫೬ರ ಮೇ ೨೫ರಂದು ರಚಿಸಿದ್ದ ಈ ಕವಿತೆಯು  ಎಂ.ವಿ. ಸೀ. ಅವರ ’ಮುಗಿಯದ ಮಾಯೆ’ ಸಂಕಲನದಲ್ಲಿದೆ.


 

No comments: