ಶ್ರೀ ಕುವೆಂಪುವಿಗೆ
ಶ್ರೀ ಗುರುವಿನೊಲುಮೆ ತೊಟ್ಟಿಲ ಶಿಶುವೆ, ನೀ ಕುಡಿದು
ಧರ್ಮಾಮೃತನ ಧನ್ಯನೆನಿಸಿದಯ್; ಆ ಮುನ್ನ
ಮಲೆನಾಡ ತಾಯ ಚೆಲುವೇ ಪೆತ್ತ ಸಿಸುರನ್ನ:
ಆಗದೇ ವರಕವಿಯ ಜನನ? ಕೊಳಲಂ ಪಿಡಿದು
ರಾಗರಾಗಗಳಿ೦ದ ಜನತೆಯ ಎದೆಯ ಮಿಡಿದು,
ಬಣ್ಣ ಬಣ್ಣದ ಗರಿಯ ಸಾವಿರ ಕಣ್ಣ ನವಿಲ-
ಹೃದಯಪೀಠದ ಸರಸ್ವತಿಯ ಗಾನದ ಗತಿಯ
ತೂಗಿ ತೋರುವ ನವಿಲ-ಕುಣಿಕುಣಿಸಿದಯ್ ತಣಿದು.
ನೆಲದ ನಲವ ಚೆಲುವ ಮಯೂರನರ್ತನ ಸಾಕೆ
ವ್ಯೋಮವಿಹಾರಾಕಾಂಕ್ಷಿ ಪಕ್ಷಿರಾಜನಿಗೆ?
ಅಮೆಬಾವಿಯೆ ಮಾನಸಸರೋವರದ ಸಂಸರಾಜನಿಗೆ?
ಹಲಮೆಹಾಡಿದರು ಹೊಸತೆನಿಸೆ ರಾಮಾಯಣಕೆ
ನವದರ್ಶನ ಸ್ಪರ್ಣಸ್ಪರ್ಶನವನಿತ್ತು ಕೃತಿಸಿ
ನವಭಾರತದ ಕವಿ ಪ್ರವರನಯ್-ನಲಿವೆ ನುತಿಸಿ.
ರಾಷ್ಟ್ರ,ಕವಿ ಕುವೆಂಪು ಅವರನ್ನು ಕುರಿತು ಎಂ.ವಿ. ಸೀತಾರಾಮಯ್ಯ ಅವರು ರಚಿಸಿದ ಕವಿತೆ. ೧೯೫೬ರ ಮೇ ೨೫ರಂದು ರಚಿಸಿದ್ದ ಈ ಕವಿತೆಯು ಎಂ.ವಿ. ಸೀ. ಅವರ ’ಮುಗಿಯದ ಮಾಯೆ’ ಸಂಕಲನದಲ್ಲಿದೆ.
No comments:
Post a Comment