Wednesday, March 8, 2023

ಕವಿಗೆ ಕವಿ ಮಣಿವನ್‌-೩ : ತಮ್ಮ ನೆನೆವ


ತಮ್ಮ ನೆನೆವ!



ಕಲ್ಲು-ಕಾಗದ-ಕಡತಗಳಲ್ಲಿ ಕಾಲನ ಕಾಲು

ಸಿಕ್ಕು ತೊಳಲಾಡುವಲಿ ಕುಣಿಕೆ ಬಿಡಿಸಿದಿರಣ್ಣ !

ಕರುವನಾಡಿಸಿದಂತೆ-ಅದನು ಕುಣಿಸಾಡಿದಿರಿ

ತಣಿದಿರಿ, ನೀವು ತಣಿಸಿದಿರಿ ಹನಿಸಿದಕಣ್ಣ.


ವೀರಚಿಂತಕ, ನಿಮ್ಮ ಧ್ಯಾನ ಬುದ್ಧಿಗೆ ಗಮ್ಯ 

ನಿಮಗೆ ನೀವೇ ಪೂರ್ವಪಕ್ಷ, ಅಕ್ಷರ-ರಮ್ಯ. 

ನಡುಹಾದಿಯಲ್ಲಿ ಬಿಡಬಹುದೆ ಜೋಗಿಯಕಂತೆ-? 

ಕನ್ನಡಕೆ ಬರಬಹುದು-ಮತ್ತೆ, ನೀವೂ ಅಂತೆ-


ಪೈಗೆ ಪೈ ಲೆಕ್ಕ ಒಪ್ಪಿಸಿದಿರಾ? ಗೋವಿಂದ

ಒಪ್ಪಿದನೆನಾ ನೆನೆವೆ ಕಸ್ತೂರಿ, ಜವ್ವಾದಿ

ಹೊರಗೆ-ಹೊಗೆ ಬೂದಿ, ಒಳಗೊಳಗೆ ಅಗ್ನಿಯ ಹಾದಿ

ನಿಮ್ಮ ಜಿಜ್ಞಾಸೆಗೆಲ್ಲಿದೆ ಮುಗಿವು? ಪದಕಾದಿ?


ಹರಿಸಿದಿರಿ ತರುಣರನು, ಆ ಅಸೂಯೆಯೆದಗ್ಧ-

ನೀವು ಕಾಲ ಜ್ಞಾನಿ ಮುಗ್ಧ, ಅಕ್ಕರಿಗ, ವಿದಗ್ಧ !



ಗೋವಿಂದ ಪೈ ಅವರನ್ನು ಕುರಿತು ಅಂಬಿಕಾತನಯದತ್ತ ರಚಿಸಿದ ಕವಿತೆ. ಪೈ ಸಂಸ್ಮರಣ ಗ್ರಂಥ ’ದೀವಿಗೆ’ಯಲ್ಲಿ ಪ್ರಕಟವಾಗಿದೆ.

 

No comments: